ಸಮ್ಮಿಲನ

ಜೀವನವೊಂದು ಸುಖ-ದುಃಖಗಳ
ಸುಂದರ ಸುದೀರ್ಘ ಯಾತ್ರೆ
ಭೇದವ ಬೆರೆಸದೆ-ಮಿಂದು
ಮುಂದೆ.. ಮುಂದೆ ಸಾಗಬೇಕು
ದ್ವೇಷ-ಅಸೂಯೆ ಬದಿಗೊತ್ತುತಲಿ
ಜಾತಿ-ಮತಗಳ ಭೇದವ ತುಳಿಯುತ
ಒಂದೇ ತಾಯಿಯ ಉದರದಿ ಜನಿಸಿದ
ಮನುಕುಲದ ಕುಡಿಗಳೆನ್ನುತಲಿ
ಮಿಂದು ಮುಂದೆ-ಮುಂದೆ ಸಾಗಬೇಕು

ನ್ಯಾಯ-ನೀತಿಯನು ಎತ್ತಿ ಹಿಡಿಯುತ
ದುಷ್ಟ-ದೌರ್ಜನ್ಯವನು ದೂರಕೆ ತಳ್ಳುತ
ಯುವಶಕ್ತಿಯನ್ನೆಲೆಡೆ ಮೆರೆಸುತ
ಭ್ರಾತೃತ್ವ, ಸೌಹಾರ್ದತೆ ಕಹಳೆ ಮೊಳಗಿಸುತ
ಅಳುಕದೆ… ಅರಳುತಲಿ… ಮುನ್ನಡೆಯುವಾ

ಮಾನವೀಯತೆಯ ಮರದಡಿಯಲಿ
ಪ್ರೀತಿ-ಪ್ರೇಮಗಳ ಬಲೆಯಲಿ
ನಾವುಗಳೆಲ್ಲ ಸಹೋದರರೆನ್ನುತಾ…
ಬಿಗುಮಾನಗಳ ಕೊಂಡಿಯ ಕಳಚಿ
ಸ್ವಾಭಿಮಾನದ ಕಿಡಿ-ಕಿಡಿಯಾಗಿ…

ಶಾಂತಿಧಾಮದ ಹಸಿರು ಬಳ್ಳಿಯಾಗುತಲಿ
ಸತ್ಯ-ಶಾಂತಿ, ಸೌಹಾರ್ದತೆ ಚಿಲುಮೆಯಾಗುತ
ಅರಿತು-ಬೆರೆತು-ಒಗ್ಗಟ್ಟಲಿ…
ಮುಂದೆ… ಮುಂದೆ… ಸಾಗಬೇಕು.

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೆಂಡೆತಿಮ್ಮ ಉವಾಚ
Next post ಭಾವೋನ್ಮಾದ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

cheap jordans|wholesale air max|wholesale jordans|wholesale jewelry|wholesale jerseys